ಮೊದಲ ಪಯಣ

ಮನೆಯ ಮಾಳಿಗೆಯ ಮೇಲೆ-
ತೋಟ ಗದ್ದೆಗಳಲಿ-
ಎತ್ತರೆತ್ತರ ಕಟ್ಟಡಗಳ ಸಂದುಗೊಂದುಗಳೊಳಗಿಂದ
ಮರಳ ಮೇಲೆ ಓಡಾಡುವ
ಸಮುದ್ರ ಹಡಗಿನ ಡೆಕ್ ಮೇಲೆ
ಗಕ್ಕನೆ ನಿಂತು ಮಕ್ಕಳಿಂದ ಮುದುಕರೂ
ನನ್ನ ಪಯಣದ ವಿಮಾನ ನೋಡಿ
ಕೈ ಬೀಸುತ್ತಿರಲೇಬೇಕು
ನಾನೂ ಒಂದೊಮ್ಮೆ ಬೀಸುತ್ತಿದ್ದಂತೆ
ಬೆರಗುಪಟ್ಟು ಕಣ್ಣು ಕಿವಿಚಿ
ಭಾರಿ ಶಬ್ದಕೆ ಕಿವಿಮುಚ್ಚಿ
ಹೋದಕಡೆಯೇ ನೆಟ್ಟ ದೃಷ್ಟಿಬೀರಿ
ನಾನೊಂದು ಬಾರಿಯಾದರೂ ಹೋಗಬಹುದೇ-
ಕನಸು ಕಾಣುತ ಕಣ್ಣರಳಿಸಿ
ಹಂಬಲಿಸಿ ಹಸಿವೆಪಟ್ಟಿದ್ದೆ.

ಯಾಕೋ ಧಡಕ್ಕನೆ ಎದೆಬಡಿತ
ಮೋಡಗಳು ವಿಮಾನದ ಹೊಯ್ದಾಟ
ಕೈ ಬೀಸುತ್ತಲೇ ಇರಬೇಕು ಅವರೆಲ್ಲಾ
ನನಗದೇಕೋ ಗುಡ್ ಬೈ ಗುಡ್ ಬೈ
ಎಂದೆನಿಸಿ ಬೆನ್ನು ಕಾವಲಿಗೆ
ಬೆವರು ನೀರು ಹರಿದು ಕಂಗಾಲಾದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೂಗಳು ಬಾಡಿಲ್ಲ
Next post ನಾವು – ನೀವು

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys